ಎಚ್ಚರ!

ಮನಸೇ ಹಸಿರಾಗಿರು ನೀನು
ಈ ಉಸಿರು ತಾನಾಗಿ ನಿಲ್ಲುವ ತನಕ
ಉಸಿರೇ ಹೆಸರಾಗಿರು ನೀನು
ಈ ಬಸಿರ ಖಿಣವು ತಾ ತೀರುವ ತನಕ ||ಪ||

ಚೆಲುವೊ-ನಲಿವೋ ಹೃನ್ಮನದ ಒಲವೊ
ಗೆಲುವ ಛಲದ ಬಲವೊಽ
ಹೂವೊ ಹಣ್ಣೊ ತಂಬೆಲರ ಸೊಗಸೊ
ನವನವದ ನವ್ಯ ನಂದನವೊಽ
ಮನ ಮನದಿ ಮಥನ
ಸೌಗಂಧ ತನನ ನವರಾಗದಿಂಪ ಸ್ವರವೊಽ
ಜೀವ ದೇವ ಭಾವೋನ್ಮಾದದ ಮಿಲನವೊಽ
ಸೋಲುಗೆಲುವ ರಂಗ ತಂತ್ರವೊಽ ||೧||

ಕಷ್ಟ-ಕಠಿಣ ಸಂಕರದ ಜಾಲವೊ
ಹಗೆಯ ಧಗೆಯ ಸುಳಿಯೊಽ
ಬರಮೋಡದಲೆಗಳಲವತನಿಲ ಸೊಗಸೊ
ಬಿರುಬಿಸಿಲ ಮರಳರಳ ನೆಲವೊಽ
ಕಣ ಕಣದಿ ದಮನದುರಿಯೊ
ಅಣು-ಅಣುವುದಹಿಸೊ ಕಡು ತಾಪ ಕೂಪವೊಽ
ದೇಹ-ಮೋಹ ದಾಹೋನ್ಮಾದದ ತಂತ್ರವೊಽ
ಅಳಿವು-ಳಿವಿನಾ ಶೂಲ ಜಾಲವೋಽ ||೨||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುದ್ಧ
Next post ಗೂಡಿಂದ ಗೂಡಿಗೆ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys